ನಡೆ ಮುಂದೆ

ಮನುಜ ನಡೆ ಮುಂದೆ ನಡೆ ಮುಂದೆ
ನೀ ನಿಂತ ತಾಣ ಇದು ಶಾಶ್ವತ ಅಲ್ಲ
ಇದು ಕೇವಲ ಕನಸುಗಳ ಗುಂಪು
ಇಲ್ಲಿಲ್ಲ ಪರಮಾತ್ಮನ ಭಕ್ತಿ ಇಂಪು

ನಿನ್ನ ಹೆಜ್ಜೆ ಹೆಜ್ಜೆಗೂ ಕಾಡಿವೆ ಮುಳ್ಳು
ಆ ಮುಳ್ಳಗಳ ನೀನು ಹೂವಾಗಿಸಬೇಕು
ಆಡಬೇಡ ವ್ಯರ್ಥ ಚರ್ಚೆ ಮಾತುಗೊಳ್ಳು
ಅದು ನಿನ್ನ ವ್ಯಕ್ತಿತ್ವ ಹನನವಾಗಿಸಲು ಸಾಕು

ಅಚಲ ಶ್ರದ್ಧೆ ಭಕ್ತಿಗಳೇ ನಿನ್ನ ಸಿದ್ಧತೆ
ಪ್ರಾಮಾಣಿಕ ನಡೆ ನುಡಿಗಳೇ ಬದ್ಧತೆ
ಸಾಧಿಸಬೇಕಾದರೆ ಈಗಲೇ ಸಾಧಿಸು
ನಾಳೆ ಎಂಬುದೆಲ್ಲ ಇಂದೇ ಭೇದಿಸು

ಭವಸಾಗರದಿಂದ ಆನಂದ ಸಾಗರತ್ತ ನಡೆ
ಮಾಡು ನಿನ್ನಯ ಈ ಜನುಮ ಕಡೆ
ಬಲು ನೀರ, ಗಾಳಿಗೆ ಚಡಪಡಿಸುವಂತೆ
ಆಗದೆ, ಮಾಡು ಮಾಣಿಕ್ಯ ವಿಠಲನ ಚಿಂತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಡುಗಡೆ ಕ್ಷಣ
Next post ಅವಳ ಕಣ್ಣುಗಳು

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys